Slide
Slide
Slide
previous arrow
next arrow

ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಆಯುಷ್ ವೈದ್ಯೆ: ಶಿಸ್ತು ಕ್ರಮಕ್ಕೆ ಆಗ್ರಹ 

300x250 AD

ಶಿರಸಿ: ತಾಲೂಕಿನ ಬನವಾಸಿಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ನೇತೃತ್ವದಲ್ಲಿ ನಡೆದ ಜನತಾ ದರ್ಶನದಲ್ಲಿ ಭೈರುಂಬೆ ಆಯುಷ್ ಆಸ್ಪತ್ರೆಯ ವೈದ್ಯರಿಗೆ ಬರುವಂತೆ ಸೂಚನೆ ನೀಡಿದರೂ ವೈದ್ಯೆ ಆಗಮಿಸದೇ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ ಘಟನೆ ನಡೆದಿದೆ.

ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಭೈರುಂಬೆಯ ಆಯುಷ್ ಆಸ್ಪತ್ರೆಯ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸಮಸ್ಯೆಯನ್ನು ಬಗೆಹರಿಸಲು ಸ್ಥಳದಲ್ಲಿಯೇ ಕಾರ್ಯತತ್ಪರರಾದ ಜಿಲ್ಲಾಧಿಕಾರಿಗಳು, ಸ್ಥಳಕ್ಕೆ ಬರುವಂತೆ ಆಸ್ಪತ್ರೆಯ ವೈದ್ಯೆ ಡಾ.ಪೂರ್ಣಿಮಾ ಅವರಿಗೆ ತಿಳಿಸಲು ಆಯುಷ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ದೂರವಾಣಿ ಮೂಲಕ ಆಯುಷ್ ಅಧಿಕಾರಿಗಳು ವೈದ್ಯೆಗೆ ಜನತಾ ದರ್ಶನಕ್ಕೆ ಬರುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ ಎನ್ನುವ ಮಾಹಿತಿಯನ್ನ ತಿಳಿಸಿದರೂ ಅಸಮ್ಮತಿ ಸೂಚಿಸಿ, ಡಾ.ಪೂರ್ಣಿಮಾ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

300x250 AD

ಸಾರ್ವಜನಿಕರ ಸಮಸ್ಯೆ ಬಗೆಹರಿಸಲೆಂದೇ ಜಿಲ್ಲಾಧಿಕಾರಿಗಳು ಜನತಾ ದರ್ಶನವನ್ನ ಹಮ್ಮಿಕೊಂಡಿದ್ದು ಈ  ಸಮಸ್ಯೆಯನ್ನು ಬಗೆಹರಿಸಲು ಜನತಾ ದರ್ಶನಕ್ಕೆ ಬರುವಂತೆ ಆದೇಶಿಸಿದ್ದರೂ ಕೂಡ ಅಸಮ್ಮತಿ ಸೂಚಿಸಿರುವ ವೈದ್ಯೆಯ ನಡೆ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಅಲ್ಲದೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಆದೇಶ ಉಲ್ಲಂಘಿಸಿದ ವೈದ್ಯೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭೈರುಂಬೆ ಪಂಚಾಯಿತಿ ವ್ಯಾಪ್ತಿಯ ದೂರುದಾರ ನಾಗರಿಕರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top